Uncategorized

ಅಭಿಯಂತರ ದಿನಾಚರಣೆ – ೨೦೨೩

ಕಾರ್ಯ ನಿಮಿತ್ತವಾಗಿ ಒಂದು ಸ್ಥಳದ  ತಪಾಸಣೆಗಾಗಿ  ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ಕರೆದಿದ್ದರು .  ಆಗ ಅವರು  ಸುಮಾರು ಎಪ್ಪತೈದು  ವಸಂತಗಳನ್ನು ಕಂಡರೂ  ಅವರು  ಕಾಯಕದಲ್ಲಿ  ಇಪ್ಪತೈದರ  ತರುಣರಾಗಿದ್ದರು ಸರ್ ಎಂ ವಿ.  ಅವರ ಜೊತೆಗೆ ತರುಣರಾದ ಎಂ ಆರ್ ವರದರಾಜನ್ ಅವರು  ಜೊತೆಗಿದ್ದರು.  ಆ ತಪಾಸಣೆ ಮಾಡುವ ಸ್ಥಳದ ತಸು ಎತ್ತರದಲ್ಲಿದ್ದು ಅಲ್ಲಿಯವರೆಗೆ ಹೋಗುವುದು ಶ್ರೀಗಳಿಗೆ  ಬೇಡವೆಂದು ವರದರಾಜನ್ ಅವರು ತಿಳಿಸಿ ನಾನೆ ಹೋಗಿ ನೋಡಿಕೊಂಡು ಬಂದು ತಮಗೆ ವರದಿ ಒಪ್ಪಿಸುವೆ ಎಂದು ತಿಳಿಸುತ್ತಾರೆ. 

ಆಗ ಶ್ರೀಗಳು ” ನೀವು ಏರಬಲ್ಲಿರಿ ಅಲ್ಲವೇ? ” ಎಂದು ಕೇಳಿದರು. 

ವರದರಾಜನ್ ಅವರು ನಾನು  ” ಏರಬಲ್ಲೆ ”  ಎಂದು ಉತ್ತರಿಸಿದರು. 

“ನೀವು ಏರಬಲ್ಲಿರಿ ಎಂದರೆ ನಾನು ಏಕೆ ಏರಲಾರೆ ” ಎಂದು ಹೇಳಿದರು. 

ವರದರಾಜನ್  ಅವರು ಎಷ್ಟೇ ಬೇಡ ಎಂದು ಪ್ರಾರ್ಥಿಸಿದರೂ , ಸೀದಾ ತಪಾಸಣೆ ಮಾಡಬೇಕಾದ ಸ್ಥಳ ತಲುಪಿ , ಎಲ್ಲಾ ವಿವರಗಳನ್ನು ಪಡೆದು  , ಪರಿಶೀಲನೆ ಮಾಡಿ ಟಿಪ್ಪಣಿ ಮಾಡಿಕೊಂಡು, ತಮ್ಮ ವರದಿಯನ್ನು ಸರ್ಕಾರಕ್ಕೆ ನೀಡಿದರು. 

ತಮಗೆ ವಹಿಸಿದ ಕಾರ್ಯವನ್ನು ಅವರು ಈ ಇಳಿವಯಸ್ಸಿನಲ್ಲಿ ಬೇರೆಯವರಿಗೆ ವಹಿಸಬಹುದಿತ್ತು, ಬೇರೊಬ್ಬರ ವರದಿಗೆ ಅವರು ತೃಪ್ತರಾಗದೆ ತಾವೇ ನಿಂತು ವಿವರ ಪಡೆದರು. ತಮಗೆ ವಹಿಸಿದ ಕರ್ತವ್ಯಕ್ಕೆ ಎಂದು ದ್ರೋಹ ಬಗೆಯದೇ  ಕರ್ತವ್ಯ ನಿಷ್ಠೆ ಪಾಲನೆ ಮಾಡಿದರು.

ಇಂದು ಸರ್ ಎಂ ವಿ ಅವರ ಜನ್ಮ ದಿನ, ನಾವೆಲ್ಲ ಹೆಮ್ಮೆಯಿಂದ ಅಭಿಯಂತರ ದಿನಾಚರಣೆ ಎಂದು ಆಚರಿಸುತ್ತೇವೆ, ಅವರ ಜೀವನದಲ್ಲಿ  ಪಾಲಿಸಿದ  ಹಾಗು ಸಾಧಿಸಿದ ಆದರ್ಶಪಾಲನೆನ್ನು ನಾವೆಲ್ಲ ಸ್ಮರಿಸಿ , ಜೀವನದಲ್ಲಿ ಅಳವಡಿಸಿಕೊಳ್ಳೋಣ. 

ಸರ್ ಎಂ ವಿ ಬಗ್ಗೆ ಬರೆದ ಹಿಂದಿನ ಲೇಖನಗಳು ..
ಕಾಯಕ ಯೋಗಿಗೊಂದು ನಮನ
ಅಜಾತ ಶತ್ರುವಿಗೊಂದು ನಮನ
http://timepassri.blogspot.in/2014/09/blog-post_15.html
ನಮ್ಮ ನಾಡು, ನಮ್ಮ ಹೆಮ್ಮೆ – ಸಜ್ಜನರು – ೧
http://timepassri.blogspot.in/2012/11/blog-post_18.html
ಹೋಗಲಿ ಬಿಡು, ಇರಲಿ ಬಿಡು, ಅಗಲಿ ಬಿಡು
http://timepassri.blogspot.in/2013/10/blog-post_24.html
ಕನ್ನಂಬಾಡಿ ಪ್ರಾಜೆಕ್ಟ್ ಓಮ್ಮೆ ನೋಡಿ!!!
http://timepassri.blogspot.in/2013/09/blog-post_12.html
ನಾಯಕರಿಗೊಂದು ದಿಕ್ಸೂಚಿ…
http://timepassri.blogspot.in/2013/04/blog-post_25.html
ಅಭಿಯಂತರ ದಿನಾಚರಣೆ – ೧೫ ಸೆಪ್ಟೆಂಬರ್
http://timepassri.blogspot.in/2011/09/blog-post.html
ಅಭಿಯಂತರ ದಿನಾಚರಣೆ – ೨೦೨೧
http://timepassri.blogspot.com/2021/09/blog-post.html

                                                        ಅಭಿಯಂತರ ದಿನಾಚರಣೆ – ೨೦೨೨

                                           http://timepassri.blogspot.com/2022/09/blog-post.html

Leave a comment